ಸತ್ಯನಾರಾಯಣ

ಸತ್ಯನಾರಾಯಣ ನಿತ್ಯಪಾರಾಯಣ
ಇತ್ತ ಬಾರೈ ಸ್ವಾಮಿ ನನ ಮನೆಗೆ
ಚಿತ್ತಯಿಸು ಎನ್ನ ಪ್ರಾರ್ಥನೆ ಎಲ್ಲವ
ವಿಸ್ತರಿಸುವೆ ನಿನ್ನ ಇದಿರೊಳಗೆ

ಶ್ರುತಿಯೊಳು ಯಾಮ ಯಾಮದಿ ನಿನ್ನ ಕಥೆಗಳ
ಕೇಳಿಹೆನುದ್ಭುತ ಚರಿತೆಗಳ
ವ್ರತವನ್ನು ಮಾಡುವೆ ಶಕ್ತ್ಯನುಸಾರದಿ
ಪರಿಹರಿಸೋ ಎನ್ನ ದುರಿತಗಳ

ನಾನಾವ ಬಗೆಯೊಳು ಪೂಜೆಯ ಮಾಡಲಿ
ಏನೇನ ಕಾಣಿಕೆಯರ್ಪಿಸಲಿ
ನೀನಿಲ್ಲದೊಸ್ತುವೆ ಕಾಣದು ಧರೆಯೊಳು
ತುಂಬಿರುವೇ ಅಣು ಘನಗಳೊಳು

ಧೂಪ ದೀಪ ಪುಷ್ಪ ನೈವೇದ್ಯದೊಳಗೆಲ್ಲ
ಅಪಾರ ಮಹಿಮನೆ ಅಡಗಿರುವೆ
ತಾಪಸೋತ್ತಮ ನಿನ್ ಪೂಜೆಯನರಿಯೆನು
ಶ್ರೀಪತಿ ನಿನಗೊಮ್ಮೆ ಕರಮುಗಿವೆ

ಸಾತ್ವಿಕ ಗುಣಗಳು ಚಲಿಸದ ಕಾಂತಿಯು
ನಿತ್ಯ ನಿರ್ಮಲ ಮನ ಶುದ್ಧಿಗಳು
ಭಕ್ತಿಯು ನಿನ್ನೊಳು ಸಮನತೆ ಜನರೊಳು
ಪುಟ್ಟಿಸು ಜನಕಜೆ ಹೃದಯದೊಳು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಂಬಳೆಯ ನಿಲ್ದಾಣ
Next post ಟೊಳ್ಳುಗಟ್ಟಿ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

cheap jordans|wholesale air max|wholesale jordans|wholesale jewelry|wholesale jerseys